Friday, May 29, 2015

ಗುರುವ ಬಿಡಲೊಲದು ಜನ ಪಿಡಿಯದವನನು ತೀರ (777)

ಗುರುವ ಬಿಡಲೊಲದು ಜನ ಪಿಡಿಯದವನನು ತೀರ |
ಧರಣಿಯಲಿ ನಿಂದಿರದು ಗಗನಕೈದದದು ||
ಅರೆಯದನುಮರೆಯಿದನುಮನುಗೂಡಿಸುತಲೆಂತೊ |
ಚರಿಸುವುದು ಹದವೆಣಿಸಿ - ಮರುಳ ಮುನಿಯ || (೭೭೭)

(ಬಿಡಲ್+ಒಲದು)(ಪಿಡಿಯದು+ಅವನನು)(ನಿಂತು+ಇರದು)(ಗಗನಕೆ+ಐದದು+ಅದು)(ಅರೆಯದನುಂ+ಅರೆಯಿದನುಂ+ಅನುಗೂಡಿಸುತಲ್+ಎಂತೊ)(ಹದ+ಎಣಿಸಿ)

ಜನಗಳು ಗುರುವನ್ನು ಹೇಗೆ ಬಿಡಿಲಾರರೋ, ಅದೇ ರೀತಿ ಅವರು ಅವನನ್ನು ಅತಿಶಯವಾಗಿ ಅನುಸರಿಸಲೂ ಆರರು. ಭೂಮಿಯ ಮೇಲೆ ನಿಂತುಕೊಂಡಿರುವುದಿಲ್ಲ, ಹಾಗೆಂದು ಆಕಾಶ(ಗಗನ)ವನ್ನು ಸೇರುವುದೂ ಇಲ್ಲ. ಅರೆದು ಪುಡಿ ಮಾಡಿರುವ ಮತ್ತು ಅರೆಯದೆ ಪುಡಿಯಾಗದಿರುವ ಎರಡನ್ನೂ ಹೊಂದಿಸಿಕೊಂಡು ಹದವನ್ನು ತಿಳಿದು ಲೋಕದಲ್ಲಿ ವರ್ತಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

People are unable either to leave their Guru or to trust him.
They are unable either to remain on the earth or to fly up in the sky,
Harmonize that half and this half some-how
And move forward with all caution – Marula Muniya (777)
(Translation from "Thus Sang Marula Muniya" by Sri. Narasimha Bhat)

No comments:

Post a Comment