Wednesday, May 20, 2015

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? (775)

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? |
ಬಂಧವಿರದಾಗಾರ ಗಾಳಿಯೆಡೆ ಸೊಡರು ||
ದ್ವಂದ್ವವಾದದಿನನಾವೃತವಾಗೆ ಸೂಕ್ಷ್ಮಕಣ್ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೫)

(ಮೊದಲ್+ಇರದ)(ನಂಬುಗೆ+ಅದು+ಏಂ)(ಬಂಧವಿರದ+ಆಗಾರ)(ಗಾಳಿ+ಎಡೆ)(ದ್ವಂದ್ವವಾದದಿನ್+ಅನಾವೃತ+ಆಗೆ)

ಮೊಟ್ಟಮೊದಲಿನಲ್ಲಿ ಸಂದೇಹವೇ ಇರದಂತಹ ನಂಬಿಕೆಗಳು ಎಂತಹ ಅಡಿಗಲ್ಲಾದೀತು? ಅದು ಸರಿಯಾಗಿ ಕಟ್ಟದಿರುವ (ಬಂಧ) ಮನೆ (ಆಗಾರ) ಮತ್ತು ಗಾಳಿಯಿರುವ ಜಗದಲ್ಲಿಟ್ಟಿರುವ ದೀಪ(ಸೊಡರ್)ದಂತೆ ಕುಸಿದು, ಆರಿಹೋಗುತ್ತದೆ. ಸೂಕ್ಷ್ಮವಾಗಿರುವ ಕಣ್ಣುಗಳು ದ್ವಂದ್ವ ತರ್ಕಗಳಿಂದ ದೂರ ಸರಿದಾಗ (ಅನಾವೃತ) ಆ ಕಣ್ಣುಗಳ ಮುಂದೆ ಸತ್ಯ(ತಥ್ಯ)ವು ಬಂದು ನಿಂತುಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Belief should grow after genuine doubt. If not it is similar to a house
Build without foundation and an open lamp exposes to wind
When your subtle eye is uncovered by opposing arguments,
Truth will stand face to face – Marula Muniya (775)
(Translation from "Thus Sang Marula Muniya" by Sri. Narasimha Bhat)

No comments:

Post a Comment