Monday, November 17, 2014

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ (695)

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ |
ಸೀದು ಬಿದ್ದಿಹ ಕಾಳು ಬೀದಿಗೆಲ್ಲ ಕಸ ||
ಬೂದಿಯಾಗದೆ ಭವದೆ ಪಕ್ವವಾಗಿಹ ಜೀವ |
ಸ್ವಾದು ರುಚಿಯೋ ಜಗಕೆ - ಮರುಳ ಮುನಿಯ || (೬೯೫)

ಕಾಳನ್ನು ಬಿಸಿಪಾತ್ರೆಯಲ್ಲಿ ಹಾಕಿ ಸರಿಯಾಗಿ ಹುರಿಯದಿದ್ದಲ್ಲಿ, ಅದು ಬಾಯಿಗೆ ರುಚಿಯಾಗುವುದಿಲ್ಲ. ಆದರೆ ಅದೇ ಕಾಳು ಬಿಸಿ ಪಾತ್ರೆಯಲ್ಲಿ ಸುಟ್ಟು ಕರಕಲಾಗಿ ಹೋದರೆ ಅದನ್ನು ಬೀದಿಗೆ ಎಸೆಯಬೇಕಾಗುತ್ತದೆ. ಅದೇ ರೀತಿ ಸಂಸಾರ(ಭವ)ವನ್ನು ನಿರ್ವಹಿಸುವುದರಲ್ಲಿ ಸುಟ್ಟು ಬೂದಿಯಾಗದೆ ಚೆನ್ನಾಗಿ ಪಕ್ವವಾಗಿರುವ ಜೀವವು, ಜಗತ್ತಿಗೆ ಎಲ್ಲರೂ ಬಯಸುವ ರೀತಿಯಲ್ಲಿ ಸವಿಯಾಗಿ ಹದವಾದ ಜೀವವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The grain that isn’t heated in a hot vessel is a tasteless waste,
The grain that is scorched becomes a waste even to the public,
The soul that ripens in the world without being burnt
Is delicious to the world – Marula Muniya (695)
(Translation from "Thus Sang Marula Muniya" by Sri. Narasimha Bhat)

No comments:

Post a Comment