Monday, October 13, 2014

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ (677)

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ |
ನೀತಿಯಿನದುದ್ಧಾರ್ಯಮೆಂಬುದುಂ ದಿಟವೇ ||
ಭೀತಿಯಿನಭೀತತಗೆ ಮೃತ್ಯುವಿನಮರ್ತ್ಯತೆಗೆ |
ಸೇತು ಪೂರುಷಜನ್ಮ - ಮರುಳ ಮುನಿಯ || (೬೭೭)

(ನರಜನ್ಮ+ಎನ್ನಿಪುದು)(ನೀತಿಯಿಂ+ಅದು+ಉದ್ಧಾರ್ಯ+ಎಂಬುದುಂ)(ಭೀತಿಯಿಂ+ಅಭೀತತಗೆ)(ಮೃತ್ಯುವಿಂ+ಅಮರ್ತ್ಯತೆಗೆ)

ಕಷ್ಟ, ದುಃಖ ಮತ್ತು ನೋವುಗಳನ್ನನುಭವಿಸುವ ಬದುಕು ಈ ನರಜನ್ಮವೆಂದು ಎನ್ನಿಸುವುದು ನಿಜ. ಆದರೆ ನೀತಿ, ನಿಯಮಗಳನ್ನು ಪಾಲಿಸುವುದರಿಂದ ಅದನ್ನು ಮೇಲಕ್ಕೆತ್ತಲು ಸಾಧ್ಯವೆನ್ನುವುದು ಸಹ ನಿಜವೇ ಹೌದು. ಹೆದರಿಕೆಯಿಂದ ನಿರ್ಭೀತಿಯ ಸ್ಥಿತಿಗೆ ಮತ್ತು ಸಾವಿನಿಂದ ಆಮೃತತ್ವಕ್ಕೆ ಸಾಗಲು ಇರುವ ಸೇತುವೆಯೆಂದರೆ ನರಜನ್ಮವೇ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is true that human life appears to be a play field of agonies
It is also true that it can be elevated to excellence through noble conduct
Human life is a bridge for us to cross from fear to fearlessness
And from death to immortality – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment