Wednesday, July 2, 2014

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ (638)

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ |
ಎಚ್ಚರಿರು ನಿನ್ನ ಸತ್ತ್ವದಲಿ ನೀಂ ನಿಂತು ||
ಅಚ್ಚುಮೆಚ್ಚೇನಾದರಿರಲಿ ಲೋಕಕ್ಕೆ ಬಿಡು |
ರಚ್ಚೆ ನೀನೇ ನಿನಗೆ - ಮರುಳ ಮುನಿಯ || (೬೩೮)

(ನೆಚ್ಚದೆ+ಇರು)(ಬೆಚ್ಚದೆ+ಇರು+ಅದು+ಆರಿಗಂ)(ಎಚ್ಚರ+ಇರು)(ಅಚ್ಚುಮೆಚ್ಚು+ಏನಾದರು+ಇರಲಿ)

ದೈವವನ್ನು(ಅದೃಷ್ಟ/ವಿಧಿ) ನಂಬಿ ನಿನ್ನ ಕೆಲಸಗಳನ್ನು ಮಾಡಬೇಡ. ಹಾಗೆಯೇ ಪ್ರಪಂಚದಲ್ಲಿ ನೀನು ಯಾರಿಗೂ ಹೆದರಲೂ ಬೇಡ. ನಿನ್ನ ಬಲದಲ್ಲಿ ನಂಬಿಕೆಯನ್ನಿಟ್ಟು ಜಾಗರೂಕನಾಗಿ ನಡೆದುಕೊ. ಅತಿಶಯವಾಗಿ ಇಷ್ಟಪಡುವುದೇನಾದರೂ ಇದ್ದಲ್ಲಿ ಅದನ್ನು ಜಗತ್ತಿಗೇ ಬಿಟ್ಟುಕೊಡು. ಒಟ್ಟಿನಲ್ಲಿ ನಿನಗೆ ನೀನೇ ರಕ್ಷೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t rely on Fate and fear not anyone
Be ever vigilant and rely on your own strength
If any happiness comes to you, leave it to the world
You are your own protector – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment