Thursday, May 22, 2014

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು (619)

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು |
ದೈವಪದಸಾಯುಜ್ಯ ದೇಹ ಬಿಟ್ಟಂದು ||
ಮೂವರಗಳಿವನು ವರಿಸಿದ ಪೂರ್ವಿಕರ್ ಸಾರ |
ಕೋವಿದರ್ ಬೇಡಂತು - ಮರುಳ ಮುನಿಯ || (೬೧೯)

(ನೋವು+ಇರದೆ)(ದೈನ್ಯತೆ+ಉಳಿದ)(ಮೂವರಗಳು+ಇವನು)(ಬೇಡ್+ಅಂತು)

ನಮ್ಮ ಪೂರ್ವಿಕರ ಜೀವನದ ತತ್ತ್ವವು ಈ ಮೂರು ಗುರಿಗಳಲ್ಲಿತ್ತು. ನೋವನ್ನು ಅನುಭವಿಸದೆಯೇ ಬರುವಂತಹ ಸಾವು. ಯಾಚನಾಸ್ಥಿತಿಗಳಿಲ್ಲದ ಜೀವನ. ಮರಣ ಬಂದಾಗ ಪರಮಾತ್ಮನ ಪಾದಾರವಿಂದವನ್ನು ಸೇರುವುದು (ಸಾಯುಜ್ಯ). ತಿಳಿದಂತಹ ಪಂಡಿತರು (ಕೋವಿದರ್) ಈ ವರಗಳನ್ನು ಬೇಡೆಂದು ಹೇಳುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Death without pain and life sans humiliation
Salvation at the feet of the Lord on giving up the body
Our ancestors who opted for the above three boons were really wise
Pray to the Lord for the same – Marula Muniya (619)
(Translation from "Thus Sang Marula Muniya" by Sri. Narasimha Bhat)

No comments:

Post a Comment